" ಸುಚರಿತ ನಿಲಯ "

This space belongs to the man who has captured wonderful moments of his past in the romantic language of poems.

Vishwa alias Kashi

My photo
I shall always remain 16years at heart plus whatever years life has to add, love to travel around the world, hope to die on a heap of books, a true believer in history and would definitely leave one before I go...

Monday, November 14, 2011

ನಾ ಕಂಡಂತೆ ನನ್ನ ದೊಡ್ಡಪ್ಪ

ನಾ ಕಂಡಂತೆ ನನ್ನ ದೊಡ್ಡಪ್ಪ
ಹೆಬ್ಬಾಲೆ ಪಾರ್ವತಮ್ಮ ಸುಬ್ಬಯ್ಯನವರ
ಜ್ಯೇಷ್ಠ  ಪುತ್ರನಾಗಿ ಜನಿಸಿ ಬಾಲ್ಯದಲ್ಲಿಯೇ
ಹೆತ್ತವರನು ಕಳಕೊಂಡು ಅನಾಥನಾಗಿ, ಸಿಕ್ಕ
ಒಂದೆರಡು ಹೆಮ್ಮರದ ಆಸರೆ ಪಡೆದು ವಿದ್ಯೆಯಾ ಕಲಿತು

ಕೆಲಕಾಲ ಶಾನುಭೋಗ ವೃತಿಯಾ ಕೈಕೊಂಡು
ಅನುಜರೊಡಗೂಡಿ ಜೀವನ ನಿರ್ವಹಣೆ ದುರ್ಭರವಾಗಿ 
 ಮಾರ್ಗ ಕಾಣದೆ ಅನುಜ ಸೀತಾರಾಮ, ನಾಗಪ್ಪ, ವೆಂಕಟಾಚಲ
ರೊಡಗೂಡಿ ಮೈಸೂರು ಪಟ್ಟಣವ ಸೇರಿ

ಉನ್ಮಾದ ವ್ಯಾಧಿಗ್ರಸ್ಥ ಸೀತಾರಾಮನ ಸೇವೆ ನಿಶ್ಪಲವಾಗಿ
ಕೃಷ್ಣರಾಜ ದವಾಖಾನೆ ಎದುರು ಕುಳ್ಳಿರಿಸಿ ಕಣ್ಣೀರ್ ಮಿಡಿದು 
ನಾಗಪ್ಪ, ವೆಂಕಟಾಚಲರೊಡಗೂಡಿ ಪಯಣ ಕೈಕೊಂಡು
ಯೌವನದಿ ನಾಗರತ್ನಳ ಕೈಹಿಡಿದು ಕೆಲದಿನದಲ್ಲಿ ಆಕೆ ಅಸುನೀಗಲು

ಗಾಯದ ಮೇಲೆ ಲವಣ ಸುರಿದಂತಾಗಿ ನಿಟ್ಟುಸಿರಿಟ್ಟು
ದುರ್ಭರ ಬಡತನಕೆ ಶರಣಾಗಿ ಉದರಂಭಣಕ್ಕೆ  ನಳಪಾಕ ವೃತ್ತಿಯಾ
ಹಿಡಿದು ಹೆಸರುಗಳಿಸಿ  ಪರಿಸರದ ಜನರಲ್ಲಿ ಮೊಗಣ್ಣನೆಂಬ
ಹೆಸರಲ್ಲಿ ಪ್ರಖ್ಯಾತನಾಗಿ, ಜೊತೆಗೆ ಎಲ್ಲಾ ಕುಶಲಕಲೆಗಳಲ್ಲಿ ನಿಷ್ಣಾತನಾಗಿ

ಶಾರದಮ್ಮಳ ಕೈಹಿಡಿದು ಆರು ಮಕ್ಕಳಿಗೆ ಪಿತನಾಗಿ
ಮಕ್ಕಳೆಲ್ಲರ ಏಳಿಗೆಗೆ ಶ್ರಮವಹಿಸಿ, ತಾನೇ ಸುಖಿ ಎಂಬ ಭಾವದಲ್ಲಿರಲು
ಸುತೆ ಸೀತಮ್ಮಳ ಪತಿ ರಾಜಣ್ಣನ ಅಕಾಲ ಸಾವಿಗೆ ಮರುಗಿ
ಕರೆತಂದು ಮಗಳು ಮೊಮ್ಮಕ್ಕಳನು ತನ್ನ ಮನೆಗೆ

ಮಗಳಿಗೆ ಆಸರೆ ನೀಡಿ ಮೊಮ್ಮಕ್ಕಳಿಗೆ  ವಿದ್ಯೆಯಾ ಕಲಿಸಿ
ಊರುಗೋಲಾಗಿ ನಿಂತರವರೆಲ್ಲರಿಗೂ ಯಜಮಾನನಾಗಿ
ಕೆಲಕಾಲ ಮೈಸೂರು ಅನಾಥಾಲಯದಲ್ಲಿ ಸೇವೆಗೈದು,
ಹೆಸರುಗಳಿಸಿ ನಳಪಾಕ ಪ್ರವೀಣನಾಗಿ

ನನ್ನ ತಂದೆ ವೆಂಕಟಾಚಲ ದೊಡ್ಡಪ್ಪ ನಾಗಪ್ಪನವರಿಗೆ
ಜೀವನೋಪಾಯಕ್ಕೆ ದಾರಿ ತೋರಿ ನನ್ನ ತಂಗಿಯರ
ಅಕಾಲ ಸಾವಿನಾದಿನಗಳಲಿ ನನ್ನ ಪಿತನಿಗೆ ಸಾಂತ್ವನ ನೀಡಿ
ನೋವಿನಲಿ ಭಾಗಿಯಾದರು ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು 


ಮನೆಗೆ ಬಂದ ಅತಿಥಿ ಅಭ್ಯಾಗತರನು ಆದರಿಸಿ ಉಪಚರಿಸಿ
ಅವರೆಲ್ಲರ ನೋವಿಗೆ ಸ್ಪಂದಿಸಿ, ಬಾಳಿಗೆದುರಾದ ಎಲ್ಲಾ ಕಷ್ಟ
ಕೋಟಲೆಗಳ ದಾಟಿ ಅತಿ ಕಷ್ಟ ಸಹಿಷ್ಣು ನಿತ್ಯ ಬಡತನದಲ್ಲೂ
ನಕ್ಕು ನಗಿಸಿದವರು  ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು

ಅವರಿಗೆ ಒಂದೆರಡು ವ್ಯಸನವಿತ್ತಾದರೂ  ಮೇರೆ ಮೀರುವಂತಿರಲಿಲ್ಲ
ಅವರಿಂದ ಕೆಲ ಕುಶಲ ಕಲೆಗಳ ಕಲಿತವನು ನಾನು. ನನ್ನ ಮನೆಯ
ಗೃಹಪ್ರವೇಶ, ನಳಪಾಕದ ಮೆಲುಸ್ತುವಾರಿಯ ರೂವರಿ ಅವರೇ
ನನ್ನ ಆಶೀರ್ವಧಿಸಿದವರು ನನ್ನ ದೊಡ್ಡಪ್ಪ ಸೂರ್ಯನಾರಾಯಣಪ್ಪನವರು

ಅವರ ವ್ಯಕ್ತಿತ್ವವನ್ನು ವರ್ಣಿಸಲು ಅಸಮರ್ಥನಾನು 
ಅತಿ ನೋವು ನುಲಿತಕೆ ಸಿಕ್ಕು ಎತ್ತರದ ಆಳು ಹುರಿ ಮೀಸೆ ಆಸಾಮಿ
ದುರ್ಮತಿ ನಾಮ ಸಂವತ್ಸರದ ಶ್ರಾವಣ ಬಹುಳ ಅಮಾವಾಸ್ಯೆ ಶನಿವಾರ
ದಂದು ಇಹದ ವ್ಯಾಪಾರಕ್ಕೆ ಇತಿಶ್ರೀ ಹಾಡಿದ ನನ್ನ ದೊಡ್ಡಪ್ಪ
ಸೂರ್ಯನಾರಯಣ್ಣಪ್ಪನವರು ಗತಿಸಿ ಮೂರು ದಶಕಗಳೇ ಕಳೆದರೂ
ಇನ್ನೂ ಹಚ್ಚ  ಹಸುರಾಗಿದೆ ಅವರೊಡನೆ ಕಳೆದ ಸುಮಧುರ ಸವಿ ನೆನಪು

ಸುಚರಿತ ನಟರಾಜ
(ಹೆಬ್ಬಾಲೆ ವೆಂಕಟಾಚಲಯ್ಯ ನಟರಾಜ)

Saturday, September 6, 2008

test

ಹಾರಿತು ಹಕ್ಕಿಯ ಬಳಗ , ಕಾಳು ಮುಗಿದ ಮೇಲೆ
ಹೊರಟಿತು ಬಂದು ಬಳಗ , ಕಾಸು ಮುಗಿದ ಮೇಲೆ

Sunday, August 24, 2008

To my Father - My Hero

He's a living Legend , not only a Hero he's my God Father in anything that I do.
I owe all my success to Him.

This blog is just one of the ways to show how much I love Him.He's composed thousands of poems which has still not found a good publisher and until I find one did not want to miss this opportunity.

ಸತಿ ರತ್ನಾಳನ್ನು ಕುರಿತು

ಇಪ್ಪತು ವರ್ಷದ ಹಿಂದೆ
ವಧುವಾಗಿ ಹಸೆಮಣೆಯನೇರಿ
ಹರ್ಷದ ಹೊನಲ ಹರಿಸಿ
ಬಾಳ ಬಂಡಿಯನೇರಿದೆ ಉತ್ಸುಹದಿ

ಏಳು ಬೀಳುಗಳ ಸಮನಾಗಿ ಸ್ವೀಕರಿಸಿ
ದುಃಖ ದುಮ್ಮಾನಗಳ ಬದಿಗೆ ಸರಿಸಿ
ಬಾಳ ದೇಗುಲದಲಿ ಬೆಳಕ ತರಿಸಿ
ಸಂಸಾರ ನಾವೆಯನು ದಡಕೆ ಸೇರಿಸಿ

ಸಿರಿತನಕೆ ಹಿಗ್ಗದೇ ಬಡತನಕೆ ಕುಗ್ಗದೇ
ಸಂಸಾರದ ಭಾರವನು ಸಮನಾಗಿ ಸ್ವೀಕರಿಸಿ
ಹಿರಿ ದೈವಗಳ ಜ್ಯೋಥೆಗೆ ಭಂದುಗಳ ಸತ್ಕರಿಸಿದೆ
ಪೋಷಿಸಿದೆ ಜಂಜಡದ ದಿನಗಳಲಿ

ವಿಶ್ವ ರಮ್ಯರೆಂಬ ಮಕ್ಕಳನ್ನು ಹೆತ್ತು
ಸಲಹಿದೆ ನೀತಿ ಪಾಠಗಳ ನರುಹಿದೆ
ಹಿತವಾದ ಸಲಹೆಗಳ ಸಮಯದಲಿ
ನೀಡುತಲಿ ನನ್ನ ನೆರಳಾಗಿ ನಿಂತೆ

ಸಪ್ತ ಪದಿ ಅರ್ಥಗಳ ಸರಿಯಾಗಿ ಅರಿತು
ಅದರಂತೆ ನಡೆದ ಗರತಿ ನೀನಾದೆ
ಸುಪ್ತ ಚೀತನದಂತೆ ನನ್ನ ಒಡಲೊಳಗೆ
ಸೇರಿ ಗುಪ್ತಗಾಮಿನಿಯಾಗಿ ಹರಿಯುತಿರುವೆ

0201 Hrs 02/04/98

Editions